ರಾಮದುರ್ಗ, 20-: ವಿವಾಹಿತ ಮಹಿಳೆಯೊಬ್ಬಳು ಮನೆಯಲ್ಲಿ ಎಲ್ಲರೂ ಕೆಲಸಕ್ಕೆ ಹೋದ ಮೇಲೆ ತನ್ನ 3 ಮಕ್ಕಳ ಜೊತೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೆನ್ನೂರ ಗ್ರಾಮದಲ್ಲಿ ಇಂದು ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಎಂದರೆ ಹನಮವ್ವ ದ್ಯಾಮಣ್ಣಾ ಕುರಿ(25) ಇವ ಮಕ್ಕಳಾದ 4 ವರ್ಷದ ಹೆಣ್ಣು ಮಗು ಪವಿತ್ರಾ, 2 ವರ್ಷದ ಗಂಡು ಮಗು ಬಸವರಾಜ ಮತ್ತು ಒಂದು ವರ್ಷದ ಪ್ರವೀಣ ಎಂದು ತಿಳಿದು ಬಂದಿದೆ.
ಮೂಲತಃ ತಾಲೂಕಿನ ಉಮತಾರ ಗ್ರಾಮದವಳಾದ ಹಣಮವ್ವಳನ್ನು ಕಳೆದ 6-7 ವರ್ಷಗಳ ಹಿಂದೆ ಬೆನ್ನೂರ ಗ್ರಾಮದ ದ್ಯಾಮಣ್ಣ ಶಿದ್ದಪ್ಪ ಕುರಿ ಎಂಬವನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಇಂದು ಗಂಡ ಚಿಕ್ಕತಡಸಿ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದು ಅಲ್ಲದೆ ಮಾವ ಶಿದ್ದಪ್ಪ ಕುರಿ ಮೇಯಿಸಲು ಹೋದ ಸಂಧರ್ಭದಲ್ಲಿ ತನ್ನ 3 ಮಕ್ಕಳನ್ನು ಗ್ರಾಮದ ಸಮೀಪವಿರುವ ಮಲಪ್ರಭಾ ನದಿಯಲ್ಲಿ ಮೊದಲು ಮೂರು ಮಕ್ಕಳನ್ನು ನದಿ ಎಸೆದು ನಂತರ ತಾನು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಲಿಸರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿರುವದಿಲ್ಲ ಈ ಪ್ರಕರಣ ರಾಮದುರ್ಗ ಪೋಲಿಸ ಠಾಣೆಯಲ್ಲಿ ಪಿ.ಎಸ್.ಐ ಅರುಣ ಮುರಗುಂಡಿ ದಾಖಲಿಸಿಕೊಂಡಿದ್ದಾರೆ.
ಚಿತ್ತಗಾಂಗ್, ಜ. 20: ಆರಂಭಿಕ ಗೌತಮ್ ಗಂಬೀರ್ (116) ಬಾರಿಸಿದ ದಾಖಲೆಂುು ಶತಕ ನೆರವಿನಿಂದ ಪ್ರವಾಸಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆಂುುುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಂುು ಮೊದಲ ಪಂದ್ಯ ಗೆಲ್ಲಲು ಆತಿಥೇಂುುರಿಗೆ 415 ರನ್ನುಗಳ ಬೃಹತ್ ಮೊತ್ತವನ್ನು ನಿಗದಿಪಡಿಸಿದೆ.
ಜವಾಬು ನೀಡಲಾರಂಭಿಸಿದ ಬಾಂಗ್ಲಾ ದೇಶ ನಾಲ್ಕನೇ ದಿನದಂತ್ಯಕ್ಕೆ 18 ಓವರುಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದ್ದು, ಸಂಕಷ್ಟದಲ್ಲಿದೆ.
ಆರಂಭಿಕ ಇಮ್ರುಲ್ ಕೇಯ್ಸ್ (1) ಹಾಗೂ ಶಹಾರ್ರಿಂುುಾರ್ ನಪೀಸ್ (21) ವಿಕೆಟಗಳು ಆತಿಥೇಂುುರಿಗೆ ನಷ್ಟವಾಗಿದ್ದು, ಪಂದ್ಯವನ್ನು ಉಳಿಸಿಕೊಳ್ಳಲು ಕಠಿಣ ಹೋರಾಟವನ್ನೇ ನಡೆಸಬೇಕಾಗಿದೆ. ಪಂದ್ಯ ಗೆಲುವಿಗಾಗಿ ಶಾಕಿಬ್ ಬಳಗಕ್ಕಿನ್ನೂ ಅಂತಿಮ ದಿನದಾಟದಲ್ಲಿ ಎಂಟು ವಿಕೆಟ್ ಬಾಕಿ ಉಳಿದಿರುವಂತೆಂುೆು 348 ರನ್ನುಗಳ ಅವಶ್ಯಕತೆಯಿದೆ. ಉತ್ತಮ ದಾಳಿ ಸಂಘಟಿಸಿದ ಜಹೀರ್ ಖಾನ್ ಹಾಗೂ ಇಶಾಂತ್ ಶರ್ಮಾ ತಲಾ ಒಂದು ವಿಕೆಟ್ ಕಿತ್ತಿದ್ದಾರೆ. ಆರಂಭಿಕ ತಮೀಮ್ ಇಕ್ಬಾಲ್ (23*) ಹಾಗೂ ಮಾಜಿ ನಾಂುುಕ ಮೊಹಮ್ಮದ್ ಅಶ್ರಪುಲ್ (16*) ಅಂತಿಮ ದಿನದಾಟಕ್ಕೆ ಬ್ಯಾಟಿಂಗ್ ಕಾಂುು್ದುಕೊಂಡಿದ್ದಾರೆ.
ಇದಕ್ಕೂ ಮೊದಲು 122/1 ಎಂನಲ್ಲಿದ ದಿನದಾಟ ಆರಂಬಿಸಿದ ಬಾರತಕ್ಕೆ ಆರಂಭಿಕ ಗಂಬೀರ್ ಬಾರಿಸಿದ ಸತತ ಐದನೇ ಟೆಸ್ಟ್ ಶತಕ ಹಾಗೂ ವಿ.ವಿ.ಎಸ್ ಲಕ್ಷ್ಮಣ್(ಅಜೇಂುು 69) ಹಾಗೂ ಅಮಿತ್ ಮಿಶ್ರಾ (50) ಬಾರಿಸಿದ ಅರ್ದಶತಕಗಳ ನೆರವಿನಿಂದ 87 ಓವರುಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 413 ರನ್ನುಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿತು. ಈ ಮೂಲಕ ಗಂಭೀರ್ ಸತತ ಐದು ಟೆಸ್ಟ್ ಪಂದ್ಯಗಳಲ್ಲಿ ಶತಕ ಬಾರಿಸಿದ ವಿಶ್ವದ ನಾಲ್ಕನೇ ಬ್ಯಾಟ್ಸಮನ್ ರೆನಿಸಿಕೊಂಡಿದ್ದಾರೆ. ಈ ಹಿಂದೆ ಇದೇ ಸಾಧನೆಂುುನ್ನು ಕ್ರಿಕೆಟ್ ದಂತಕತೆ ಆಸ್ಟ್ತ್ರೇಲಿಂುುಾದ ಡಾನ್ ಬ್ರಾಡ್ಮಾನ್, ದಕ್ಷಿಣ ಆಪ್ರಿಕಾದ ಜಾಕ್ವಾಸ್ ಕಾಲಿಸ್ ಹಾಗೂ ಪಾಕಿಸ್ತಾನದ ಮೊಹಮ್ಮದ್ ಂುೂಸುಪ್ ತಲುಪಿದ್ದಾರೆ.
ಈ ಪಟ್ಟಿಂುುಲ್ಲಿ ಅಗ್ರಪಂಕ್ತಿಂುುಲ್ಲಿರುವ ಬ್ರಾಡ್ಮಾನ್ ಸತತ ಆರು ಟೆಸ್ಟ್ ಪಂದ್ಯಗಳಲ್ಲಿ ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ.
ಸೊಗಸಾದ ಬ್ಯಾಟಿಂಗ್ ಪ್ರದರ್ಶನವಿತ್ತ ಗೌತಮ್ 129 ಎಸೆತಗಳಲ್ಲಿ 10 ಬೌಂಡರಿ ಹಾಗೂ ಒಂದು ಮನವೋಹಕ ಸಿಕ್ಸರ್ನ ನೆರವಿನಿಂದ 116 ರನ್ ಗಳಿಸಿದರು.
ಗಂಬೀರ್ಗೆ ಉತ್ತಮ ಬೆಂಬಲ ನೀಡಿದ ನೈಟ್ ವಾಚ್ಮ್ಯಾನ್ ಅಮಿತ್ ಮಿಶ್ರಾ ಚೊಚ್ಚಲ ಅರ್ದಶತಕ (50) ಬಾರಿಸಿದ ತಕ್ಷಣ ದೊಡ್ಡ ಹೊಡೆತಕ್ಕೆ ಕೈ ಹಾಕುವ ಮೂಲಕ ಪೆವಿಲಿಂುುನ್ ಸೇರಿಕೊಂಡರು. ಇದು ಟೆಸ್ಟ್ನಲ್ಲಿ ಮಿಶ್ರಾರಿಂದ ದಾಖಲಾದ ಸರ್ಮಾದಿಕ ಗಳಿಕೆಂುುಾಗಿದೆ.
ಗಂಭೀರ್-ಮಿಶ್ರಾ ಜೋಡಿ ಎರಡನೇ ವಿಕೆಟ್ಗೆ 98 ರನ್ನುಗಳ ಜೊತೆಂುುಾಟ ನೀಡಿದರು.
ನಂತರ ಬಂದ ಲಿವಾಲ್ಳಿ ಖ್ಯಾತಿಂುು ರಾಹುಲ್ ದ್ರಾವಿಡ್ (24) ರನೌಟಗೆ ಬಲಿಂುುಾದರು. ಮೊದಲ ಇನ್ನಿಂಗ್ಸ್ನ ಶತಕವೀರ ಬ್ಯಾಟ್ಸಮಾನ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (16), ಂುುುವರಾಜ್ ಸಿಂಗ್ (25) ಹಾಗೂ ದಿನೇಶ್ ಕಾರ್ತಿಕ್ (27), ಜಹೀರ್ ಖಾನ್ (20) ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾದರು.
ಮತ್ತೊಂದೆಡೆ ಕಲಾತ್ಮಕ ಇನ್ನಿಂಗ್ಸ್ ಬೆಳಿಸಿದ ವಿ.ವಿ.ಎಸ್. ಲಕ್ಷ್ಮಣ (69*) ಅಜೇಂುು ಅರ್ಧಶತಕ ಬಾರಿಸುವ ಮೂಲಕ ಬಾರತದ ಗಡಿ 400 ದಾಟಿಸಿದರು. 89 ಎಸೆತಗಳನ್ನು ಎದುರಿಸಿದ ಲಕ್ಷ್ಮಣ ಇನ್ನಿಂಗ್ಸ್ನಲ್ಲಿ ಐದು ಬೌಂಡರಿಗಳು ಶಾಮೀಲಾಗಿತ್ತು. ಕೊನೆಗೆ ಬಂದ ಇಶಾಂತ್ ಶರ್ಮಾ 7 ರನ್ ಗಳಿಸಿ ಅಜೇಂುುರಾಗುಳಿದರು.
ಬೆಂಗಳೂರು, ಜ.20- ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಅಧ್ಯಯನ ನಡೆಸಿ ವರದಿ ನೀಡಲು ಸಕ್ಕರೆ ನಿರ್ದೇಶಕರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.
ಕಬ್ಬು ಬೆಳೆಗಾರರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬಿಗೆ ವಿಮೆ ಜಾರಿ ಸಾಧ್ಯವಿಲ್ಲ. ಪರ್ಯಾಯ ಮಾರ್ಗ, ಬೇರೆ ರಾಜ್ಯಗಳಲ್ಲಿರುವ ಸ್ಥಿತಿ-ಗತಿ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ತಜ್ಞರ ಸಮಿತಿ ರಚಿಸಲಾಗುವುದು ಎಂದರು.
ಸಕ್ಕರೆ ಬೆಳೆಗಾರರ ಸಮಸ್ಯೆ ಕುರಿತಂತೆ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯಲಾಗುವುದು ಎಂದ ಅವರು, ಕಬ್ಬಿಗೆ ಉತ್ತಮ ಬೆಲೆ ಸಿಗಬೇಕೆಂಬುದೇ ಸರ್ಕಾರದ ಉದ್ದೇಶವಾಗಿದೆ ಎಂದರು.
ಕೆಲ ಕಾರ್ಖಾನೆಗಳು ಕಬ್ಬಿಗೆ ಬಾಕಿ ಹಣ ಪಾವತಿಸದೆ ರೈತರಿಗೆ ಕಿರುಕುಳ ನೀಡುತ್ತಿದ್ದು, ಅಂತಹ ಕಾರ್ಖಾನೆಗಳ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡು ಕಂದಾಯ ಬಾಕಿ ವಸೂಲಿ ಮಾಡಲು ಸೂಚಿಸಲಾಗಿದೆ ಎಂದರು.
ತಜ್ಞರ ಅಧ್ಯಯನ ವರದಿ ಬಂದ ನಂತರ ಅದರ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದ ಅವರು, 2009-10ನೇ ಸಾಲಿಗೆ ಕಬ್ಬಿನ ದರ ನಿಗದಿಪಡಿಸಲಾಗಿದ್ದು, ಶೇ.9.5 ರಷ್ಟು ಇಳುವರಿ ಇರುವ ಪ್ರತಿ ಟನ್ ಕಬ್ಬಿಗೆ 1298 ರೂ.ನೀಡಲಾಗುತ್ತಿದೆ. ಅದನ್ನು 51 ಸಕ್ಕರೆ ಕಾರ್ಖಾನೆಗಳಲ್ಲಿ 1800 ರೂ. ನಿಂದ 2050 ರೂ.ವರೆಗೂ ಹೆಚ್ಚಿಸಲಾಗಿದೆ. ಇದು ಉತ್ತರ ಕರ್ನಾಟಕದ ರೈತರಿಗೆ ಮಾತ್ರ ಅನ್ವಯವಾಗಲಿದೆ ಎಂದರು.
ದಕ್ಷಿಣ ಕರ್ನಾಟಕದಲ್ಲಿ ಸಾಗಾಣಿಕೆ, ಕಟಾವು ವೆಚ್ಚ ಸೇರಿ ಪ್ರತಿ ಟನ್ಗೆ 1500 ರಿಂದ 1798 ರೂ. ಕಬ್ಬಿನ ದರ ನಿಗದಿ ಮಾಡಲಾಗಿದೆ ಎಂದರು.
ಪ್ರತಿಭಟನೆ ತಾತ್ಕಾಲಿಕ ಹಿಂದಕ್ಕೆ: ಕಬ್ಬು ಬೆಳೆಗಾರರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ ಎಂದು ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ ತಿಳಿಸಿದ್ದಾರೆ.
ಕಬ್ಬು ಬೆಳೆಗಾರರೊಂದಿಗೆ ಮುಖ್ಯಮಂತ್ರಿಗಳು ನಡೆಸಿದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಬ್ಬಿನ ದರ ನಿಗದಿಪಡಿಸಲು ಫೆಬ್ರವರಿ 20ರವರೆಗೆ ಗಡುವು ನೀಡಲಾಗಿದೆ. ಅಲ್ಲಿಯವರೆಗೂ ಪ್ರತಿಭಟನೆ ಹಿಂದಕ್ಕೆ ಪಡೆಯಲಾಗಿದೆ ಎಂದರು.
ರಾಜ್ಯ ಸಲಹಾ ದರ (ಎಸ್ಎಪಿ) ನಿಗದಿಪಡಿಸಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಪ್ರತಿ ಟನ್ ಕಬ್ಬಿಗೆ ನ್ಯಾಯಯುತ ಬೆಲೆಯನ್ನು ಸಕ್ಕರೆ ಕಾರ್ಖಾನೆಗಳು ನೀಡಲಾಗದಿದ್ದರೆ ಅಕ್ಕಿ ಗಿರಣಿಗಳಂತೆ ಕಬ್ಬನ್ನು ಪಡೆದು ಸಕ್ಕರೆಯನ್ನು ರೈತರಿಗೆ ನೀಡಲಿ ಎಂದು ಆಗ್ರಹಿಸಿದರು. ಬೆಳೆಗಾರರ ಕೆಲ ಸಮಸ್ಯೆಗಳಿಗೆ ಸಿಎಂ ಸ್ಪಂದಿಸಿದ್ದು, ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಲನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಹೈದರಾಬಾದ್, ಜ.20- ಪ್ರತ್ಯೇಕ ತೆಲಂಗಣಾ ರಾಜ್ಯ ರಚನೆ ವಿವಾದದಿಂದ ಕೊಂಚ ವಿರಾಮ ಪಡೆದಿದ್ದ ಆಂಧ್ರಪ್ರದೇಶ ಇದೀಗ ಮತ್ತದೇ ಆಸ್ಪೌಟಕ್ಕೆ ಗುರಿಯಾಗಿದೆ.
ರಾಜ್ಯ ರಚನೆ ನಿರ್ಣಯವನ್ನು ಅಂತಿಮಗೊಳಿಸುವಂತೆ ಪಟ್ಟು ಹಿಡಿದಿರುವ ತೆಲಂಗಣಾ ರಾಷ್ಟ್ತ್ರ ಸಮಿತಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿ ಜಂಟಿ ಕ್ರಿಯಾ ಸಮಿತಿ ಇಂದು ಅಖಂಡ ಆಂಧ್ರ ಬಂದ್ಗೆ ಕರೆ ನೀಡಿದ್ದು, ಕೆಲವಡೆ ಹಿಂಸಾಚಾರ ಮುಗಿಲು ಮುಟ್ಟಿದೆ. ಆಕ್ರೌಶ ಭರಿತ ತೆಲಂಗಣ ಪರ ಕಾರ್ಯಕರ್ತರು ರಾಜ್ಯ ರಸ್ತೆ ಸಾರಿಗೆ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿ ಹಲವು ಬಸ್ಗಳನ್ನು ಬೆಂಕಿಗೆ ಆಗುತಿ ಮಾಡಿದ್ದಾರೆ. 48 ಗಂಟೆಗಳ ಬಂದ್ಗೆ ಕರೆ ನೀಡಿರುವುದರಿಂದ ರಾಜಧಾನಿ ಹೈದರಾಬಾದ್ ಸೇರಿದಂತೆ ತೆಲಂಗಣ ಭಾಗದ 9 ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಸ್ ಸಂಚಾರ ಸ್ಥಗಿತಗೊಂಡಿದೆ.
ಎಲ್ಲೆಡೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ಗೆ ಸಂಪೂರ್ಣ ಬೆಂಬಲ ನೀಡುತ್ತಿರುವ ವ್ಯಾಪಾರಿಗಳು, ವಿದ್ಯಾರ್ಥಿ ಸಮುದಾಯ ಹಾಗು ರಾಜಕೀಯ ಪಕ್ಷಗಳ ಮುಖಂಡರು ಕೇಂದ್ರದ ವಿರುದ್ಧ ಉಗ್ರ ಹೋರಾಟಕ್ಕೆ ಮುನ್ನುಡಿ ಬೆರೆದಿದ್ದಾರೆ.
ಮತ್ತೊಂದೆಡೆ ತೆಲಂಗಣ ರಾಜ್ಯ ರಚನೆ ನಿರ್ಣಯವನ್ನು ಅಂತಿಮ ಗೊಳಿಸುವಂತೆ ಆಗ್ರಹಿಸಿ ಉಸ್ಮಾನಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಮುದಾಯ ಆತ್ಮಹತ್ಯೆಯತ್ತ ಮುಖ ಮಾಡಿದೆ. ಈಗಾಗಲೆ ವೇಣುಗೋಪಾಲ್ ರೆಡ್ಡಿ, ಸುವರ್ಣಮ್ಮ ಎಂಬ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಮತ್ತಷ್ಟು ಕಿಚ್ಚುಹಚ್ಚಿಸಿದೆ.
ರಾಜಕಾರಣಿಗಳು, ವಿದ್ಯಾರ್ಥಿ ಸಮುದಾಯವನ್ನೊಳಗೊಂಡ ಜಂಟಿ ಕ್ರಿಯಾಸಮಿತಿ ಇದೆ ದಿ.28ರೊಳಗೆ ರಾಜೀನಾಮೆ ಸಲ್ಲಿಸಿರುವ ಸಂಸತ್ ಹಾಗೂ ವಿಧಾನ ಸಭೆ ಸದಸ್ಯರ ರಾಜೀನಾಮೆಯನ್ನು ಅಂಗೀಕರಿಸಿಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಇಂದು ಮತ್ತು ನಾಳೆ ತೆಲಂಗಣ ಜಿಲ್ಲೆಗಳಲ್ಲಿ ಬಂದ್ ಮುಂದುವರಿಸಿದ್ದು, ಪ್ರತ್ಯೇಕ ತೆಲಂಗಣ ಬಿಕ್ಕಟ್ಟು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಹಲವೆಡೆ ರಾಜ್ಯ ರಸ್ತೆ ಸಾರಿಗೆಯ ಬಸ್ಗಳನ್ನು ಜಖಂಗೊಳಿಸಿರುವ ಪ್ರತಿಭಟನಾಕಾರರು ರಸ್ತೆಗಳಲ್ಲಿ ಟೈಯರ್ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೌಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಕೇಂದ್ರದ ಮೇಲೆ ಒತ್ತಡ ಹೇರಲು ಹಾಗೂ ತಮ್ಮ ರಾಜೀನಾಮೆ ಪತ್ರಗಳನ್ನು ಸ್ವೀಕರಿಸುವಂತೆ ಆಗ್ರಹಿಸಿ ತೆಲಂಗಣ ರಾಷ್ಟ್ತ್ರ ಸಮಿತಿ ಐವರು ವಿಧಾನ ಸಭೆ ಸದಸ್ಯರು, ಪ್ರಜಾರಾಜ್ಯಂ ಓರ್ವ ಶಾಸಕ ಕಳೆದ ರಾತ್ರಿ ಸ್ಪೀಕರ ಕಿರಣಕುಮಾರ ರೆಡ್ಡಿಯವರನ್ನು ಭೇಟಿ ಮಾಡಿ 3 ದಿನಗಳೊಳಗೆ ರಾಜೀನಾಮೆ ಅಂಗೀಕರಿಸದಿದ್ದಲ್ಲಿ ಹೋರಾಟವನ್ನು ಹೆಚ್ಚಿಸಲು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು, ಜ.20: ತಮ್ಮ ಹೋರಾಟ ನೈಸ್ ಸಂಸ್ಥೆಗೆ ಮಾತ್ರ ಸೀಮಿತವಾಗಿಲ್ಲ ಎಂದು ಸ್ಪಷ್ಟಪಡಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ರಾಜ್ಯಾದ್ಯಂತ ರೈತರ ಸಮಸ್ಯೆಗಳ ವಿರುದ್ದ ಹೋರಾಟ ಕೈಗೊಳ್ಳುವುದಾಗಿ ಇಂದಿಲ್ಲಿ ಹೇಳಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತ ನಾಡಿದ ಅವರು ದೇವೇಗೌಡರು ನೈಸ್ ಸಂಸ್ಥೆ ವಿರೋಧಿ ಹೋರಾಟಕ್ಕೆ ಮಾತ್ರ ಸೀಮಿತ ಎಂಬ ಭಾವನೆ ಬೇಡ.ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಕೈಗೊಂಡು ರೈತರ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತೇನೆ ಎಂದರು.
ಜ.22ರಂದು ಬಿಜಾಪುರದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದ್ದು, ಅನಂತರ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಳ್ಳುವದಾಗಿ ತಿಳಿಸಿದರು.
ನೆರೆ ಪೀಡಿತ ಬಿಜಾಪುರದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದ್ದು, ಆನಂತರ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಳ್ಳುವದಾಗಿ ತಿಳಿಸಿದರು.
ನೆರೆಪೀಡಿತ ಪ್ರದೇಶಗಳಲ್ಲಿ ಪುನರ್ವಸತಿ ಪರಿಹಾರ ಕಾರ್ಯಗಳಲ್ಲಾಗಿರುವ ಅನ್ಯಾಯ, ಗ್ರಾಮಗಳ ಸ್ಥಳಾಂತರ ಸಮಸ್ಯೆ ಅರಿಯಲು ಖುದ್ದಾಗಿ ಆಯಾ ಗ್ರಾಮಗಳಿಗೆ ಭೇಟಿ ನೀಡಿ ಪರೀಶೀಲಿಸಿ ಸಂಕಷ್ಟಗಳನ್ನು ಆಲಿಸುತ್ತೇವೆ ಎಂದರು. ಆನಂತರ ರಾಜ್ಯ ಮಟ್ಟದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಸಂಘಟಿಸಲಾಗು ವದು ಎಂದು ಹೇಳಿದರು. ಜ.23,24,25 ಹಾಗೂ 28ರಂದು ಪ್ರವಾಸ ಕೈಗೊಳ್ಳುತ್ತೇನೆ ಎಂದರು.
ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿದ್ದರೂ ಜನಸಾಮಾನ್ಯರ ಸಮಸ್ಯೆಗಳ ಪರ ಧ್ವನಿ ಎತ್ತಲಿದೆ ಎಂದರು.ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಾವುದೇ ವ್ಯಕ್ತಿಗತ ತೀರ್ಮಾನವನ್ನು ಕೈಗೊಂಡಿಲ್ಲ ಎಂದರು. ಸರಕಾರದ ವೇಗದ ಅಭಿವೃದ್ದಿಗೆ ಅಡ್ಡಿಯಾಗುತ್ತಿದ್ದಾರೆಂಬ ಆರೋಪವನ್ನು ನಿರಾಕರಿಸಿದ ಗೌಡರು ದೆಹಲಿ ಹಾಗೂ ಸಂಸತ್ ಸಭೆಗಳನ್ನು ಬದಿಗಿಟ್ಟು ಪ್ರತಿ ಜಿಲ್ಲೆಯ ಪ್ರತಿಯೊಂದು ಸಮಸ್ಯೆಯನ್ನು ಆಲಿಸಿದ್ದೇನೆ ಎಂದರು.
ದಾವಣಗೆರೆಯಲ್ಲಿ ನಡೆದ ಹೋರಾಟ ನಮ್ಮಿಂದ ಪ್ರೇರಣೆ ಪಡೆದದ್ದಲ್ಲ. ಅದಕ್ಕೆ ರಾಜಕೀಯ ಬಣ್ಣ ಕಟ್ಟಬೇಕಿಲ್ಲ. ಸರಕಾರ ನಡೆಸುವರರು ನಿರ್ಣಯ ಕೈಗೊಳ್ಳುವಾಗ ಜವಾಬ್ದಾರಿಯಿಂದ ವರ್ತಿಸಬೇಕೆಂದರು.
ಬೆಂಗಳೂರು, ಜ. 20: ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷರಾಗಿ ಮಾಜಿ ಸಚಿವ ಹಿರಿಯ ಧುರೀಣ ಪಿ.ಜಿ.ಆರ್. ಸಿಂಧ್ಯಾ ಅವರನ್ನು ನೇಮಕ ಮಾಡಲಾಗಿದೆ ಎಂದು ಜೆಡಿಎಸ್ ರಾಷ್ಟ್ತ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರುಚಿ ಇಂದು ಇಲ್ಲಿ ಪ್ರಕಟಿಸಿದರು.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡರು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಸಮಾಲೋಚನೆ ನಡೆಸಿ ಸಿಂಧ್ಯಾ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದರು.
ಪಕ್ಷವನ್ನು ರಾಷ್ಟ್ತ್ರ ಮಟ್ಟದಲ್ಲಿ ಬೆಳೆಸಿಕೊಳ್ಳುವುದರಲ್ಲಿ ಸಿಂಧ್ಯಾ ಸಮರ್ಥರಾಗಿದ್ದಾರೆ. ಆದರೆ ಮೂಲ ಸೌಲಭ್ಯದ ಕೊರತೆಯಿಂದ ಅವರನ್ನು ರಾಜ್ಯ ಮಟ್ಟಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರು.
ಬೆಂಗಳೂರು, ಜ.20: ಏಪ್ರಿಲ್ 1, 2006ರ ನಂತರ ಸರ್ಕಾರಿ ಸೇವೆಗೆ ಸೇರಿರುವ ಸುಮಾರು 60 ಸಾವಿರ ಮಂದಿ ನೌಕರರಿಗೆ ವರದಾನವಾಗುವಂತಹ ಪಿಂಚಣಿ ಯೋಜನೆ ಜಾರಿಗೊಳಿಸುವ ಮಹತ್ವದ ಒಡಂಬಡಿಕೆಗೆ ರಾಜ್ಯ ಸರ್ಕಾರ ಮತ್ತು ಎಂಪಿಎಸ್ ಟ್ರಸ್ಟ್ ಇಂದು ಅಂಕಿತ ಹಾಕಿದೆ.
ಈ ಸಂಬಂಧ ಬೆಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಆರ್. ಶ್ರೀನಿವಾಸಮೂರ್ತಿ, ಎಂಪಿಎಸ್ ಟ್ರಸ್ಟ್ನ ಎನ್.ಆರ್. ರಾಯಲು ಹಾಗೂ ಎನ್ಎಸ್ಡಿಎಲ್ನ ಜಗನ್ ರಾಯಿ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದರು.
ಪ್ರತಿ ವರ್ಷ 15 ರಿಂದ 20 ಸಾವಿರ ನೌಕರರು ಈ ಹೊಸ ಪಿಂಚಣಿ ಯೋಜನೆ ವ್ಯಾಪ್ತಿಗೆ ಸೇರಲಿದ್ದಾರೆ.
ನಿವೃತ್ತಿ ನಂತರ ನೌಕರರಿಗೆ ಈ ಸೌಲಭ್ಯ ದೊರಕಲಿದ್ದು, ಒಂದು ಏಳೆ ನೌಕರರು ಮೃತಪಟ್ಟಲ್ಲಿ ಅವರ ಅವಲಂಭಿತರಿಗೆ ಈ ಪ್ರಯೋಜನೆ ದೊರಕಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಮ್ಮ ಸರ್ಕಾರ ಸರ್ಕಾರಿ ನೌಕರರಿಗೆ ಗರಿಷ್ಠ ಸೌಲಭ್ಯ ಕಲ್ಪಿಸಿಕೊಟ್ಟಿದೆ. ವಿವಿಯ ಬೋಧಕ ಸಿಬ್ಬಂದಿಗೆ ಯುಜಿಸಿ ವೇತನ ನೀಡುತ್ತಿದೆ. 5ನೇ ವೇತನ ಶಿಫಾರಸ್ಸುಗಳನ್ನು ಜಾರಿಗೆ ತರಲಾಗಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿಯನ್ನು 50 ವರ್ಷಗಳಿಗೆ ಹೆಚ್ಚಳ ಮಾಡಿದ ಕೀರ್ತಿ ಕೂಡ ಬಿಜೆಪಿ ಸರ್ಕಾರಕ್ಕೆ ಇದೆ ಎಂದರು.
ಬೆಂಗಳೂರು, ಜ. 20: ರೈತರ ಎಲ್ಲ ಸಮಸ್ಯೆಗಳಿಗೆ ಸರ್ವಸಮ್ಮತ ಪರಿಹಾರ ಹುಡುಕುವ ಯಾವುದೇ ಮಂತ್ರದಂಡ ಸರ್ಕಾರದ ಬಳಿ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಹತಾಶೆಯ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವಾರು ದಶಕಗಳಿಂದ ರೈತರ ಸಮಸ್ಯೆ ಮುಂದುವರೆದುಕೊಂಡು ಬಂದಿದೆ. ನಮ್ಮ ಸರ್ಕಾರ ಇದುವರೆಗೆ ಯಾವುದೇ ಸರ್ಕಾರ ಕೊಡದೇ ಇರುವಷ್ಟು ಸೌಲಭ್ಯವನ್ನು ರಐತ ಸಮುದಾಯಕ್ಕೆ ಕೊಟ್ಟಿದೆ.
ಹೀಗಾಗಿ ಅವರ ಎಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡುವ ಮಂತ್ರದಂಡ ತಮ್ಮ ಬಳಿ ಇಲ್ಲ ಎಂದು ಹೇಳಿದರು.
ಸರ್ಕಾರದ ವಿರುದ್ದ ದಂಗೆ ಎದ್ದಿರುವ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಆಯಾಯ ಜಿಲ್ಲೆಯಲ್ಲಿ ಬರುವ ಸಕ್ಕರೆ ಕಾರ್ಖಾನೆಗಳ ಮಾಲೀಕರೇ ಪರಿಹಾರ ಹುಡುಕಬೇಕು. ಈ ವಿಷಯದಲ್ಲಿ ಸರ್ಕಾರ ಏನೂ ಮಾಡಲಿಕೆ ಆಗೋದಿಲ್ಲ, ಇದರಲ್ಲಿ ಸರ್ಕಾರದ ಪಾತ್ರ ಬಹಳ ಕಡಿಮೆ ಇದೆ ಎಂದು ಜಾರಿಕೊಂಡರು.
ಜಿಲ್ಲಾ ಉಸ್ತುವಾರಿ ಸಚಿವರು, ಸಕ್ಕರೆ ಕಾರ್ಖಾನೆಗಳ ಮಾಲೀಕರು, ರೈತ ಮುಖಂಡರು ಒಂದೆಡೆ ಕುಳಿತು ಪರಸ್ಪರ ವಿಶ್ವಾಸದ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಈಗ ಸಕ್ಕರೆಗೆ ಎಂದೂ ಇಲ್ಲದಂತಹ ಬೆಲೆ ಬಂದಿದೆ. ಈ ಸಂದರ್ಭದಲ್ಲಿ ಅವರೂ ಕೂಡ ಪರಿಸ್ಥಿತಿ ಅರ್ಥ ಮಾಡಿಕೊಂಡು ರೈತರಿಗೆ ನೆರವಿಗೆ ಬರಬೇಕು, ಸಮಸ್ಯೆಯ ಪರಿಹಾರಕ್ಕೆ ಸಹಕಾರ ಕೊಡಬೇಕು ಎಂದೂ ಕಿವಿ ಮಾತು ಹೇಳಿದರು.
ಮುಂದಿನ ಬಜೆಟ್ನಲ್ಲಿ ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗುವ ಯೋಜನೆಗಳನ್ನು ಪ್ರಕಟಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ನಮ್ಮ ಸರ್ಕಾರ ಸಾಧ್ಯವಾದಷ್ಟೂ ಗರಿಷ್ಟ ಸೌಲಭ್ಯಗಳನ್ನು ರೈತ ಸಮುದಾಯಕ್ಕೆ ಒದಗಿಸಿಕೊಟ್ಟಿದೆ. ಹೀಗಾಗಿ ಮುಂದಿನ ಬಜೆಟ್ನವರೆಗೆ ಕಾಯುವಂತಹ ಅಗತ್ಯವಿಲ್ಲ ಎಂದು ಹೇಳಿದರು.
ಪಕ್ಷದ ಉಸಾಬರಿ, ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷ ತಈರ್ಮಾನ ತೆಗೆದುಕೊಳ್ಳಲಿದೆಯೇ ಹೊರತು ಸರ್ಕಾರ ಇದರಲ್ಲಿ ತಲೆ ಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣೆ ಪಕ್ಷಕ್ಕೆ ಸಂಬಂಧಪಟ್ಟ ವಿಚಾರ ಅಭ್ಯರ್ಥಿಗಳನ್ನು ನಿಲ್ಲಿಸುವುದು ಪಕ್ಷದ ಪಟ್ಟಿ ಪ್ರಣಾಳಿಕೆ ತಯಾರು ಮಾಡುವುದು ಪಕ್ಷಕ್ಕೆ ಸೇರಿದ ಸಂಗತಿ. ಆದ್ದರಿಂದ ಇದರ ಬ ಗಗೆ ಸರ್ಕಾರ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದೇ ವೇಳೆ ವಿವಾದಾತ್ಮಕ ಬಿಟಿ ಬದನೆಕಾಯಿ ಬೆಳೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಸೂಕ್ತ ಹಾಗೂ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು. ಬಿಟಿ ಬದನೆಕಾಯಿ ಬಗ್ಗೆ ಪರ ಮತ್ತು ವಿರೋಧ ಕುರಿತಂತೆ ಚರ್ಚೆ ನಡೆಯುತ್ತಿದೆ. ಜನರ ಆರೋಗ್ಯ ಮತ್ತು ಪರಿಸರ ಎರಡನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಉತ್ತರಿಸಿದರು.
ನಿರ್ಧಾರಕ್ಕೆ ಅಗತ್ಯ: ಮಹಾದಾಯಿ ಜಲ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯಾರ್ಥಪಡಿಸಿಕೊಳ್ಳಲು ರಾಜ್ಯ ಸರ್ಕಾರ ಬಹಳ ಉತ್ಸುಕವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾತುಕತೆ ಮೂಲಕವೇ ಈ ವಿವಾದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಈಗಾಗಲೇ ಪ್ರಮಾಣ ಪತ್ರ ಸಲ್ಲಿಸಿದೆ. ಕೇಂದ್ರ ಸರ್ಕಾರ ನಿರ್ಧಾರವನ್ನು ತಾವು ಸ್ವಾಗತ ಮಾಡುತ್ತೇವೆ. ರಾಜ್ಯ ಸರ್ಕಾರ ಈ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳುವ ನಿಲುವನ್ನು ಬಹಳ ಹಿಂದಿನಿಂದಲೂ ಪ್ರತಿಪಾದನೆ ಮಾಡಿಕೊಂಡು ಬಂದಿದೆ.
ಮಹಾದಾಯಿಯಲ್ಲಿ ರಾಜ್ಯದ ನೀರಿನ ಪಾಲು 45 ಟಿಎಂಸಿ ಇದೆ. ಇದರಲ್ಲಿ 7.5 ಟಿಎಂಸಿ ಕುಡಿಯಲಿಕ್ಕೆ ಬಳಸಲು ನಿರ್ಧರಿಸಲಾಗಿದ್ದು ಗೋವಾ ಸರ್ಕಾರ ಯಾವುದೇ ಕಾರಣಕ್ಕೂ ಇದಕ್ಕೆ ಅಡ್ಡಿ ಉಂಟು ಮಾಡಬಾರದು ಎಂದು ಅವರು ಹೇಳದಿರು.
(ಕನ್ನಡಮ್ಮ ವಾರ್ತೆ)
ಮೂಡಲಗಿ,18- ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಪ್ರಗತಿಯಾಗಲು ಹಮ್ಮಿಕೊಂಡ ಕಾರ್ಯಕ್ರಮಗಳು ಮೂಡಲಗಿ ವಲಯವು ಬೇರೆ ವಲಯಗಳಿಗೆ ಮಾದರಿಯಾಗಬೇಕಾಗಿದೆ, ಶಿಕ್ಷಣ ಹಾಗೂ ಆರೋಗ್ಯ ಇಲಾಖೆಗಳ ಅಧಿಕಾರಿಗಳ ಸಹಕಾರದೊಂದಿಗೆ ಕಾಯಕಲ್ಪಕೋಡುವದಾಗಿ ಬೆಳಗಾವಿ ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ|| ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ, ಬಿ.ಆರ್.ಸಿ ಕಾರ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಹಮ್ಮಿಕೊಂಡ ಮುಸ್ಲಿಂ ಸಮುದಾಯದ ನಾವಿನ್ಯಯುತ ಶೈಕ್ಷಣಿಕ ಜಾಗೃತಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಅರಭಾವಿ ಕ್ಷೇತ್ರದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಉರ್ದು ಶಾಲೆಗಳ ಕೋರತೆ ಇತ್ತು ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಐದು ವರ್ಷಗಳಲಿ ಕ್ಷೇತ್ರಕ್ಕೆ ಉರ್ದು ಪ್ರಾಥಮಾಕ ಹಾಗೂ ಪ್ರೌಢ ಶಾಲೆಗಳನ್ನು ಸಾಕಷ್ಟು ನೀಡಿದಾರೆ ಮುಂದಿನ ದಿನಗಳಲ್ಲಿ ಯಾದವಾಡ,ಕೌಜಲಗಿ, ಮೇಳವಂಕ್ಕಿ ಗ್ರಾಮಗಳಿಗೆ ಪ್ರೌಢ ಶಾಲೆಗಳನ್ನು ಪ್ರಾರಂಭಿಸಲ್ಲಿಕ್ಕೆ ಪ್ರಯತ್ನಿಸುವದಾಗಿ ತಿಳಿಸಿದರು. ಮೂಡಲಗಿಯಲ್ಲಿ ಶಿಕ್ಷಕರ ಗುರುಭವನ ನೀರ್ಮಿಸಲ್ಲಿಕ್ಕೆ ಪುರಸಭೆಯವರು ಭೂಮಿ ನೀಡಿದಲ್ಲಿ ಅನುದಾನ ಒದಗಿಸುವ ಭರವಸೆ ನೀಡಿದರು.
ಸಮಾರಂಭದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಎ.ಎಸ್.ಸಯ್ಯದಸಾಬ, ಮಹ್ಮದ ಅಜ್ಮಖಾನ, ಎನ್.ಎ. ಮಕಾನಂದಾರ ಮುಸ್ಲಿಂ ಸಮುದಾಯದ ಪಾಲಕರು ಉರ್ದು ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವದೆರೊಂದಿಗೆ ಸಮುದಾಯದಲ್ಲಿ ಜಾಗೃತಿ ಮುಡಿಸಲು ಕೇಳಿಕೊಂಡರು. ಬಿ.ಟಿ.ಟಿ.ಕಮೀಟಿ ಅಧ್ಯಕ್ಷ ಅಜೀಜಿ ಡಾಂಗೆ ಅಧ್ಯಕ್ಷತೆ ವಹಿಸಿದರು.ಪುರಸಭೆ ಪ್ರಭಾರಿ ಅಧ್ಯಕ್ಷ ಸಂತೋಷ ಸೋನವಾಲ್ಕರ, ಜಿ.ಪಂ.ಸದಸ್ಯರಾದ ಶಮಕರ ಬೀಲಕುಂದಿ, ಭಾರತಿ ಪಾಟೀಲ, ಸುಧಿರ ಜೋಡಟ್ಟಿ, ಮತ್ತು ಅನ್ವರ ನಧಾಪ, ಎನ್.ಎಮ್.ಥರಥರಿ, ಆರ್.ಎಮ್.ಮಹಾಲಿಂಗಪೂರ,ಮಹಾತೇಶ ಸಣ್ಣಕ್ಕಿ, ಬಿ.ಎಚ್.ಮುಲ್ಲಾ,ಎಸ್.ಬಿ.ಕುಂಬಾರ ಮತ್ತಿಥರು ಉಪಸ್ಥೀತರಿದರು. ಬಿ.ಆರ್.ಸಿ ಅಧಿಕಾರಿ ಎಮ್.ಆರ್.ಮುಂಜಿ ಸ್ವಾಗತಿಸಿದರು, ಬಿ.ಎಮ್. ಮೋಮಿನ ಹಾಗೂ ಡಿ.ಕೆ.ಜಮಾದಾರ ನಿರೂಪಿಸಿದರು, ಬಿ ಅಜೀತ ಮನ್ನೀಕೇರಿ ವಂದಿಸಿದರು.
ಬೆಳಗಾವಿ, ಜನೇವರಿ18: ಸುವರ್ಣ ವಸ್ತ್ತ್ರ ನೀತಿ ಯೋಜನೆಯಡಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ವತಿಯಿಂದ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಬೆಳಗಾವಿ ನಗರದಲ್ಲಿ ಆರಂಭಿಸಲಾದ ಶಿಹೊಸ ಕೌಶಲ್ಯಾಭಿವೃದ್ದಿ ಕೇಂದ್ರಷಿ ವನ್ನು ಜವಳಿ, ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾದ ಶ್ರೀ. ಗೂಳಿಹಟ್ಟಿ ಡಿ. ಶೇಖರ ಅವರು ಇಂದು ಉದ್ಘಾಟಿಸಿದರು.
ನಗರದ ಮಾರುತಿಗಲ್ಲಿಯಲ್ಲಿರುವ ಅರವಿಂದ ಕಾಂಪ್ಲೇಕ್ಸ್ನಲ್ಲಿಂದು ಈ ಹೊಸ ಕೌಶಲ್ಯಾಭಿವೃದ್ದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಸರಕಾರವು ರಾಜ್ಯದಲ್ಲಿ ಕೌಶಲ್ಯಾಭಿವೃದ್ದಿಗಾಗಿ ಒಟ್ಟು 20 ಕೇಂದ್ರಗಳನ್ನು ಈಗಾಗಲೇ ಮಂಜೂರು ಮಾಡಿದೆ. ಇದಕ್ಕಾಗಿ 30 ಲಕ್ಷ ರೂ. ಅನುದಾನ ನೀಡಿದ್ದು, ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ವತಿಯಿಂದ ಬೆಳಗಾವಿಯಲ್ಲಿ ಈ ಕೇಂದ್ರ ಆರಂಭಕ್ಕೆ ಇಂದು ಚಾಲನೆ ದೊರೆತ್ತಿದೆ. ಅದರಂತೆ ರಾಜ್ಯದ ಬಿಜಾಪೂರ, ಹಾಸನ, ಕೋಲಾರ ಹಾಗೂ ಚಾಮರಾಜನಗರದಲ್ಲಿ ಈ ಸಂಸ್ಥೆ ಆರಂಭಕ್ಕೆ ಕ್ರಮಕೈಗೊಳ್ಳಲಾಗಿದೆಯೆಂದು ಸಚಿವರು ಹೇಳಿದರು.
ಸುವರ್ಣ ವಸ್ತ್ತ್ರ ನೀತಿ ಯೋಜನೆಯಡಿ (2008 ರಿಂದ 5 ವರ್ಷಗಳ ವರೆಗೆ) ಒಟ್ಟು 500 ಕೋಟಿ ರೂ. ವೆಚ್ಚ ಮಾಡಿ 5 ಲಕ್ಷ ನಿರುದ್ಯೌಗಿಗಳಿಗೆ ಉದ್ಯೌಗ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಈ ಯೋಜನೆಯಡಿ ವಿದ್ಯುತ್ ಮಗ್ಗ, ಕೈಮಗ್ಗ, ಕಸೂತಿ, ಹೀಗೆ ಹತ್ತು ಹಲವು ವೃತ್ತಿಗಳಿಗೆ ಪ್ರೌತ್ಸಾಹ ನೀಡಲು ಕ್ರಮಕೈಗೊಳ್ಳಲಾಗಿದೆ. ಗಾರ್ಮೆಂಟ್ಸ್ ಉದ್ದಿಮೆಗಳನ್ನು ಹೆಚ್ಚಿನ ರೀತಿಯಲ್ಲಿ ಸ್ಥಾಪಿತಗೊಂಡು ಹೆಚ್ಚಿನ ಜನರಿಗೆ ಉದ್ಯೌಗ ಅವಕಾಶ ಕಲ್ಪಿಸಬೇಕೆಂಬ ಸದುದ್ದೇಶ ಸರಕಾರ ಹೊಂದಿದೆ. ಈ ದಿಸೆಯಲ್ಲಿ ಉದ್ದಿಮೆದಾರರು ಮೊದಲು ತರಬೇತಿ ವ್ಯವಸ್ಥೆ ಮಾಡುವಂತೆ ಅಭಿಪ್ರಾಯವನ್ನು ಹೇಳಿದ್ದು, ಅದರನ್ವಯ ಈಗ ಕೌಶಲ್ಯಾಭಿವೃದ್ದಿ ತರಬೇತಿಯ ವ್ಯವಸ್ಥೆ ಮಾಡಲಾಗಿದ್ದು, ಅದರಂತೆ ಈ ಉದ್ಯಿಮೆಗಳಿಗಾಗಿ ವಿಶೇಷ ಮೂಲಭೂತ ಸೌಕರ್ಯಗಳನ್ನು ಸರಕಾರದಿಂದ ಒದಗಿಸುವ ಮೂಲಕ ಮುಂಬರುವ ದಿನಗಳಲ್ಲಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಗಾರ್ಮೆಂಟ್ಸ್ ಉದ್ದಿಮೆಗಳಲ್ಲಿ ಹೆಚ್ಚಿನ ಉದ್ಯೌಗ ಅವಕಾಶ ಸೃಷ್ಠಿಸಲು ನೆರವಾಗಲಿದೆ ಎಂದು ಹೇಳಿದರು.
ಸರಕಾರವು ನೇಯ್ಗೆ, ಕಸೂತಿ, ಕೈಮಗ್ಗ, ವಿದ್ಯುತ್ ಮಗ್ಗಗಳಲ್ಲಿ ತರಬೇತಿ ದೊರಕಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಈಗ ಕೌಶಲ್ಯಾಭಿವೃದ್ದಿ ತರಬೇತಿ ಪಡೆಯುವವರಿಗೆ 2000/- ರೂ.ಗಳ ಶಿಷ್ಯವೇತನವು ಸಹ ನೀಡಲಾಗುತ್ತಿದ್ದು, ಈ ಹಿಂದೆ ಇಂತಹ ಸೌಲಭ್ಯ ಯಾವ ಸರಕಾರವು ನೀಡಿಲ್ಲ ಎಂದ ಅವರು ರಾಜ್ಯದಲ್ಲಿ ಅಕ್ಕಪಕ್ಕದ ರಾಜ್ಯಗಳ ಮಾದರಿಯಂತೆ ಗಾರ್ಮೆಂಟ್ಸ್ ಯುನಿಟ್ ಸ್ಥಾಪನೆ ಮಾಡುವ ಉದ್ದಿಮೆದಾರರಿಗೆ ವಿದ್ಯುತ್, ಸಾಲ ಹಾಗೂ ರಿಯಾಯಿತಿ ನೀಡುವ ಮೂಲಕ ಹೆಚ್ಚಿನ ಉದ್ದಿಮೆಗಳನ್ನು ಸ್ಥಾಪಿಸಲು ಪ್ರೌತ್ಸಾಹ ನೀಡಿ ಹೆಚ್ಚು ಉದ್ಯೌಗ ಅವಕಾಶ ಸೃಷ್ಠಿಯಾಗುವಂತೆ ಪ್ರಯತ್ನಿಸಲಾಗುವುದೆಂದು ಹೇಳಿದರು. ಅದರಂತೆ ಬೆಳಗಾವಿ ಜಿಲ್ಲೆಗೆ ಅವಶ್ಯಕವಿರುವ ಟೆಕ್ಸ್ಟೈಲ್ಸ್ ಪಾರ್ಕ್ ಸ್ಥಾಪನೆಗೂ ಸಹ ಕ್ರಮಕೈಗೊಳ್ಳಲಾಗುವುದೆಂದು ಸಚಿವರು ಹೇಳಿದರು.
ಸಮಾರಂಭದಲ್ಲಿ ಶಾಸಕ ಸಂಜಯ ಪಾಟೀಲ ಅವರು ಕಳೆದ 50 ವರ್ಷಗಳಿಂದ ಆಗದ ಮಹತ್ತರ ಕಾರ್ಯವನ್ನು ಈಗ ಜವಳಿ ಸಚಿವರಿಂದ ಆಗಿದ್ದು, ಬೆಳಗಾವಿಯಲ್ಲಿ ಕೌಶಲ್ಯಾಭಿವೃದ್ದಿ ಕೇಂದ್ರ ಸ್ಥಾಪನೆಯಿಂದ ಇಲ್ಲಿಯ ಮಹಿಳೆಯರಿಗೆ ಫ್ಯಾಶನ್ ತಂತ್ರಜ್ಞಾನದಲ್ಲಿ ಹೆಚ್ಚಿನ ಉನ್ನತಿ ಪಡೆಯಲು ನೆರವಾಗಲಿದೆ ಎಂದು ಹೇಳಿದರು. ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀಮತಿ. ಅಶ್ವಿನಿ ಪಾಟೀಲ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ನಿರ್ದೇಶಕ ಬಿ. ವೇದಗಿರಿ ಮಾತನಾಡಿದರು. ಸಮಾರಂಭದಲ್ಲಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳಾದ ಡಾ|| ವಿಜಯಕುಮಾರ ತೋರಗಲ್ ಉಪಸ್ಥಿತರಿದ್ದರು. ಬೆಳಗಾವಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಜ್ಹೌರಪ್ಪ ಮಲಕೇರಿ ಸ್ವಾಗತಿಸಿದರು.