ಸಂಪತ್ತು ಹೇರಳ ಸಂರಕ್ಷಣೆ ವಿರಳ: ಸಿಎಂ ವಿಷಾದ
ಬೈಲಹೊಂಗಲ,15-ನಮ್ಮದು ಚಿನ್ನದ ನಾಡು, ಗಂಧದ ರೇಷ್ಮೆಯ ಬೀಡು, ದಡ್ಡವಾದ ಅರಣ್ಯಪ್ರದೇಶ ಫಲವತ್ತಾದ ಭೂಮಿ, ಖನಿಜ ಸಂಪತ್ತು ಹೇರಳವಾಗಿದೆ. ಆದರೆ ಇಂಥ ನಾಡಿನಲ್ಲಿ ಪ್ರಾಮಾಣಿಕ ಕೈಗಳ ಕೊರತೆ ಇದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದರು. ಸ್ಥಳೀಯ ಪಟ್ಟಣದ 3ನೇ ಹಂತದ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ಮತ್ತು ನೂತನ ಸಹಾಯಕ ಪ್ರಾದೇಶಿಕ ಸಾರಿಗೆ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಸ್ವಾತಂತ್ರ್ಯ ಸಿಕ್ಕು 62 ವರ್ಷಗಲೂ ಗತಿಸಿದರೂ ಹಿಂದಿನ ಸರಕಾರಗಳು ಜನತೆಗೆ ಹಾಗೂ ಗ್ರಾಮೀಣ ಭಾಗಕ್ಕೆ ಮೂಲಭೂತ ಸೌಕರ್ಯಗಳನ್ನು [...] [...more]
