ಬಾಗಲಕೋಟೆ, ಜ9: ಜನವರಿ 10 ರ ಭಾನುವಾರ ನಡೆಯುವ 1 ನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮದ ಉದ್ಘಾಟನೆಯನ್ನು ಸೆಕ್ಟರ್ ನಂ.3ರ ಸರಕಾರಿ ಪ್ರೌಢ ಶಾಲೆ 5 ರಲ್ಲಿ ಬೆ.9 ಗಂಟೆಗೆ ಹಮ್ಮಿಕೊಳಲಾಗಿದೆ.
ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ವೀರಣ್ಣ ಚರಂತಿಮಠ, ಎಂ.ಪಿ.ನಾಡಗೌಡರು ಹಾಗೂ ಎಸ್.ಆರ್.ಪಾಟೀಲ್ ಅವರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಚೌದರಿ ಅವರು ತಿಳಿಸಿದ್ದಾರೆ
[...more]
ಬಾಗಲಕೋಟೆ, ಜ.9: ಶ್ರೀ ಮೋಟಗಿ ಬಸವೇಶ್ವರ ಜಾತ್ರೆಯನ್ನು ಫೇಬ್ರವರಿ 3 ರಿಂದ 7 ನೇ ತಾರೀಖಿನ ವರೆಗೆ ಏರ್ಪಡಿಸಲಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಸಿದ್ರಾಮಪ್ಪ ಜಕ್ಕನಗೌಡರ್ ತಿಳಿದರು.
ಅವರು ಶುಕ್ರುವಾರ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಜಾತ್ರೆಗೆ ಆಗಮಿಸುವ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳಾದ ನೀರು, ಸ್ವಚ್ವತೆ,ವಿದ್ಯುತ್, ಜಾನುವಾರುಗಳಿಗೆ ಓಷಧಿ, ಜಾತ್ರೆಗೆ ಬರುವವರಿಗೆ ಬಸ್ ಸೌಲಭ್ಯ, ಹಾಗೂ ಸಂಬಂಧಿಸಿದ ಮುಂಜಾಗೃತ ಕ್ರಮಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕೋರಿದರು.
ಸಭೆಯಲ್ಲಿ ಕಾರ್ಯದರ್ಶಿಗಳಾದ ಎನ್.ಬಿ.ಅಜ್ಜಪ್ಪನವರ್, ಉಪಾಧ್ಯಕ್ಷರಾದ ವಿ.ಎಚ್.ಕರೋಲಿ ಹಾಗೂ ಸದಸ್ಯರು, ಕೆಪಿಟಿಸಿಎಲ್, [...] [...more]
ಬಾಗಲಕೋಟೆ, ಜ.9: ಜಿಲ್ಲಾಧಿಕಾರಿ ಡಿ.ಎಸ್.ವಿಶ್ವನಾಥ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಜರುಗಿತು.
ಸಭೆಯಲ್ಲಿ ನಡೆದ ರಾಷ್ಟ್ತ್ರೀಯ ರಸ್ತೆ ಸುರಕ್ಷತಾ ಸಪ್ತಾಹಾದ ಉದ್ಘಾಟನಾ ಸಮಾರಂಭದಲ್ಲಿ ವ್ಯಕ್ತ ಪಡಿಸಿದ ಅನಿಸಿಕೆಗಳಂತೆ ಬಾಗಲಕೋಟ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರದೇಶಗಳಲ್ಲಿ ಎಲ್ಲಾ ವಿವಿಧ ವಾಹನಗಳನ್ನು ತನಿಖೆಗೆ ಒಳಪಡಿಸಲಾಗುವುದು. ಆದ್ದರಿಂದ ಸಾರ್ವಜನಿಕರು ವಾಹನಗಳನ್ನು ನೋಂದಣಿ ಕೊಡಲೇ ಮಾಡಿಸಿಕೊಳ್ಳುಂತೆ ಸಾರ್ವಜನಿಕರಿಗೆ ವಿನಂತಿಸಲು ತಿರ್ಮಾನಿಸಲಾಯಿತು. ಶಾಲಾ ಮಕ್ಕಳು ವಯೋಮಿತಿ ಹೊಂದದೆ ಇರುವವರು ವಾಹನ ಚಾಲನೆಯನ್ನು ಮಾಡುತ್ತಿದ್ದು ಅದರ ಮೇಲೆ [...] [...more]
ಬಾಗಲಕೋಟೆ, ಜ.9: ಪ್ರಸ್ತುತ ವರ್ಷಕ್ಕೆ ನಿಗಧಿಪಡಿಸಿರುವ ಗುರಿಯಂತೆ ಮಾರ್ಚ ಅಂತ್ಯದ ವೇಳೆಗೆ ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣ ಗೊಳಿಸಬೇಕೆಂದು ಬಾಗಲಕೋಟೆ ಶಾಸಕರಾದ ವೀರಣ್ಣ ಚರಂತಿಮಠ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಬಾಗಲಕೋಟೆಯಲ್ಲಿ ತಾಲೂಕು ಪಂಚಾಯ್ತಿಯ ಕೆಡಿಪಿ ತ್ರೈಮಾಸಿಕ ಪ್ರಗತಿ ಪರೀಶೀಲನೆ ನಡೆಸಿದ ಅವರು ವಿದ್ಯುತ್ ಸರಬರಾಜು ಕಂಪನಿಯಿಂದ ಬೋಡನಾಯಕನದಿನ್ನಿ ಮತ್ತು ಅಚನೂರು ಗ್ರಾಮಗಳಿಗೆ ಟ್ರಾನ್ಸ್ ಪಾರ್ಮರ್ ಅಳವಡಿಕೆಮಾಡಲು, ಕಡ್ಲಿಮಟ್ಟಿ ಮತ್ತು ಮಾಲ್ಲಾಪೂರ ದಲ್ಲಿ ಟ್ರಾನ್ಸ್ಪಾರ್ಮರ್ ಕಳವಾದ ಬಗ್ಗೆ ಕ್ರಮ ಕೈಗೊಳ್ಳಲು ಮತ್ತು ಶಿರೂರಿನಲ್ಲಿ ವಿದ್ಯುತ್ ಕಂಬಗಳ ಸ್ಥಾಳಾಂತರ [...] [...more]
ಜಮಖಂಡಿ 27- ಕೂಡಿಟ್ಟ, ಗಳಿಸಿದ ಹಣದಲ್ಲಿ ಸ್ವಲ್ಪ ಭಾಗ ಅಧ್ಯಾತ್ಮದ ಕೇಂದ್ರಗಳಿಗೆ ಸಹಾಯ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಗಣಿಧಣಿ; ಕೆ.ಎಮ್.ಎಫ್. ರಾಜ್ಯಾಧ್ಯಕ್ಷ ಹಾಗೂ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು, ಅವರು ಸಮೀಪದ ಹುನ್ನೂರ-ಮಧುರಖಂಡಿ ಗ್ರಾಮದ ಬವ ಜ್ಞಾನ ಗುರುಕುಲದ, ಶರಣ ಕುಟೀರದ ಉದ್ಘಾಟನೆ, ಪ್ರಾರ್ಥನಾ ಮಂದಿರ, ಬಡಮಕ್ಕಳ ದತ್ತು ಸ್ವೀಕಾರ ಹಾಗೂ ಪ್ರಸಾದ ನಿಲಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು., ಗಣಿಧಣಿಗಳು ಎಂದು ಎಲ್ಲದರಲ್ಲೂ ಬಿಂಬಿಸುತ್ತಾರೆ ಆದರೆ ಹುಟ್ಟುವಾಗಲೇ ಗಣಿಧಣಿಗಯಾಗಿ ಹುಟ್ಟುವದಿಲ್ಲ ಬಡ ಸಾಮಾನ್ಯ ಕುಟುಂಬದಲ್ಲಿಯೇ ಜನಿಸಿ. [...] [...more]
ಬಾಗಲಕೋಟೆ, ಡಿ.16 ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚಿನ ಜೈವಿಕ ಇಂಧನ ಅಭಿವೃದ್ದಿ ಪಡಿಸಲು ಒತ್ತು ನೀಡಬೇಕೆಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಕಾರ್ಯಪಡೆಯ ಅಧ್ಯಕ್ಷರಾದ ಶ್ರೀ ವೈ.ಬಿ.ರಾಮಕೃಷ್ಣ ಅವರು ಅಧಿಕಾರಿಗಳಿಗೆ ತಿಳಿಸಿದರು
ಬುಧುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಸಿರು ಹೊನ್ನು ಯೋಜನೆ ಕುರಿತು ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಜಿಲ್ಲೆಯಲ್ಲಿ ಹೆಚ್ಚಿನ ಜೈವಿಕ ಇಂಧನ ಸಸಿಗಳನ್ನು ಬೆಳೆಸಲು ಕ್ರಮ ಕೈಗೊಳ್ಳಬೇಕೆಂದರು. ಕೃಷಿ ಚಟುವಟಿಕೆಗೆ ಯೋಗ್ಯವಲ್ಲದ ಬಂಜರು ಭೂಮಿಯಲ್ಲಿ ಹೊಂಗೆ,ಜತ್ರೌಪ,ಬೇವು,ಹಿಪ್ಪೆ ಮತ್ತು ಸಿಮರೂಬ ಸಸಿಗಳನ್ನು ಬೆಳೆಸುವ ಮೂಲಕ [...] [...more]
ಜಮಖಂಡಿ- ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಪ್ರಪ್ರಥಮ ಬಾರಿಗೆ ರಾಷ್ಟ್ತ್ರೀಯ ಹಾಗೂ ಅಂತರಾಷ್ಟ್ತ್ರೀಯ ಹೊನಲು ಬೆಳಕಿನ ಮಹಿಳೆಯುರ ಹಾಗೂ ಪುರುಷರ ಪುಟ್ ಬಾಲ 7-ಂ ಮಾದರಿಯ ಫುಟ್ ಬಾಲ ಪಂದ್ಯಾವಳಿಗಳು ಇದೆ ದಿನಾಂಕ 18,19,20 ಡಿಶಂಬರ 2009ವರೆಗೆ ಜರಗುವುದು ಎಂದು ಪ್ರಭುಲಿಂಗೇಶ್ವರ ಶುಗರ್ಸ ಲಿ. ಅಧ್ಯಕ್ಷರಾದ ಶ್ರೀ ಜಗದೀಶ ಗುಡಗುಂಟಿ ಅವರು ಇಂದಿಲ್ಲಿ ಹೇಳಿದರು.
ಇಗಾಗಲೇ ಪಂದ್ಯಾವಳಿಗಾಗಿ ಮೈದಾನ ಸಜ್ಜುಗೊಳ್ಳುತ್ತಿದ್ದು ಕ್ರೀಡೆಗಳ ಯಶಸ್ವಿಗಾಗಿ ಹಲವಾರು ಸಮಿತಿಗಳನ್ನು ರಚಿಸಲಾಗಿದ್ದು ಶಾಸಕ ಶ್ರೀ ಶ್ರೀಕಾಂತ ಕುಲಕರ್ಣಿ ಸ್ವಾಗತ ಹಾಗೂ ಉಸ್ತುವಾರಿ ಸಮಿತಿಯ ಅಧ್ಯಕ್ಷತೆ [...] [...more]
ಜಮಖಂಡಿ,ಡಿ.03: ಸಾರ್ವಜನಿಕ ಸೇವಾ ಸಂಸ್ಥೆಗಳು ನಾಯಿ ಕೊಡೆಗಳಂತೆ ಜನ್ಮ ತಾಳಿ ಮಾಯವಾಗುತ್ತವೆ. ಆದರೆ ಇಂದು ಪ್ರಾರಂಭಗೊಂಡ ಕರ್ನಾಟಕ ನವ ನಿರ್ಮಾಣ ಸೇನಾ ಸಂಸ್ಥೆ ಧೀರ್ಘಕಾಲದ ವರೆಗೆ ಬಾಳಿ ಬೆಳಗುವಂತಾಗಲಿ ಎಂದು ಶಾಸಕ ಶ್ರೀಕಾಂತ ಕುಲಕರ್ಣಿ ಅವರು ಇಂದಿಲ್ಲಿ ಹೇಳಿದರು.
ಅವರು ಇಲ್ಲಿಯ ಬಸವ ಭವನದಲ್ಲಿ ಕರ್ನಾಟಕ ನವ ನಿರ್ಮಾಣ ಸೇನಾ ಸಂಸ್ಥೆಯನ್ನು ಉಧ್ಘಾಟಿಸಿ ಮಾತನಾಡಿದರು. ಈ ನೂತನ ಸಂಸ್ಥೆ ಪದಾಧಿಕಾರಿಗಳು ಕಾಯಾ, ವಾಚಾ, ಮನಸಾ ಕೆಲಸ ಮಾಡಿ ಸರಕಾರದ ಸೌಲಭ್ಯಗಳನ್ನು ಎಲ್ಲರಿಗೂ ದೊರಕಿಸಿ ಕೊಡುವಲ್ಲಿ ತಮ್ಮ ಜೊತೆಗೆ ನಾನು [...] [...more]
ಬಾಗಲಕೋಟ-29, ನೆರೆ ಹಾವಳಿ ಮತ್ತು ಪುನರ್ವ ಸತಿಯ ಸವಾಲುಗಳ ಕುರಿತ ಚಿಂತನಾ ಸಭೆಯನ್ನು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಉದ್ಘಾಟಿಸಿದರು.
ಅವರು ಇಂದು ಉತ್ತರ ಕರ್ನಾಟಕ ಪ್ರದೇಶ ರೈತ ಸಂಘವು ನಗರದ ಮೌನೇಶ್ವರ ಮಾಧ್ಯಮಿಕ ಶಾಲೆಯ ಆವ ರಣದಲ್ಲಿ ಇಂದು ಚಿಂತನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ರೈತರ ಸಾಲಮನ್ನಾ ಮಾಡಿ ಅವರು ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯುವಂತೆ ಸರಕಾರ ಮಾಡಬೇಕೆಂದರು.
ಸಮಾವೇಶದ ಅಧ್ಯಕ್ಷತೆಯನ್ನು ರೈತ ಸಂಘದ ರಾಜ್ಯಾಧ್ಯಕ್ಷ ಎಸ್.ಆರ್.ಸ್ವಾಮಿ ವಹಿಸಿದ್ದರು. ಮುಖ್ಯ ಅತಿಥಿಗಳಾಗು ರೈಲ್ವೆ ಹೋರಾಟ ಸಮಿತಿ [...] [...more]
ಬಾಗಲಕೋಟ-29, ಇಂದಿನ ಕಂಪ್ಯೂಟರ್ ಯುಗದಲ್ಲಿ ಉತ್ಪಾದನಾ ರಂಗದ ಅತೀ ಚುರುಕಾದ ಮಶಿನ್ಗಳು ನೇರವಾಗಿ ಇ-ಮೇಲೆ ಮುಖಾಂತರ ಸೂಚನೆಗಳನ್ನು ಸ್ವೀಕರಿಸಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿ ಉತ್ಕ್ಕಷ್ಟ ಗುಣಮಟ್ಟದ ಉತ್ಪನ್ನಗಳನ್ನು ಹೊರಹಾಕುವ ಸಾಮರ್ಥ್ಯ ಹೊಂದಿರುತ್ತವೆ ಎಂದು ಬೆಂಗಳೂರಿನ ಎಸ್.ಎ.ಇಂಜಿನಿಯರಿಂಗ್ ವರ್ಕ್ಸ ಪ್ರೊ.ಲಿ.ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಎಲ್. ಶಿವರಾಮ್ ರೆಡ್ಡಿ ಹೇಳಿದರು.
ಅವರು ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ನೋವುಸ್-09 (ನವ್ಯತೆಯ ಹಾದಿಯಲ್ಲಿ) ಪ್ರಬಂಧ ಮಂಡನಾ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಮುಂದುವರೆದು ಆಯ್.ಟಿ.ಕ್ಷೇತ್ರದಲ್ಲಾದ ಕ್ಷಿಪ್ರಕ್ರಾಂತಿಕಾರಿ ಬದಲಾವಣೆಗಳಿಂದ ಪುನರ್ ಪರೀಶೀಲಿಸಿ ಯೋಜಿಸಿ, ಸಿದ್ಧಪಡಿಸುವ ಮಶಿನ್ (ಯಂತ್ರ)ಗಳಿಗೆ [...] [...more]