ಅನುಕಂಪದ ಆಧಾರದ ಮೇಲೆ ನೇಮಕಕ್ಕೆ ಮಾರ್ಗ ಸುಲಭ
Posted on 11 November 2009 by Venkatesh
ಬೆಂಗಳೂರು, 11- ಕಾಸಗೀ ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸುವಾಗಲೆ ಅಕಸ್ಮಿಕವಾಗಿ ಉದ್ಯೌಗಿಗಳ ಸಾವು ಸಂಭವಿಸಿದರೆ ಅನುಕಂಪದ ಆಧಾರದ ಮೇಲೆ ಆ ಕುಟುಂಬದ ಸದಸ್ಯರೊಬ್ಬರಿಗೆ ನೇಮಕಾತಿ ನೀಡಲು ಮಾರ್ಗವನ್ನು ಸರಳಗೊಳಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆ ಸಂಸ್ಥೆಯ ಶಾಲೆಗಳಲ್ಲಿ ನೇಮಕಾತಿ ಕೊಡಲು ಯಾವುದೇ ಹುದ್ದೆಗಳು ತೆರವಾಗಿರದಿದ್ದರೆ ಅದೇ ರೀತಿಯ ಬೇರೆ ಸಂಸ್ಥೆಗಳ ಶಾಲೆಗಳಲ್ಲಿ ನೇಮಕಾತಿ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಇದು ವರೆಗೆ ಈ ವ್ಯವಸ್ಥೆ ಇಲ್ಲದ್ದರಿಂದ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಲು ತೊಂದರೆಯಾಗುತ್ತಿತ್ತು. ಈಗ ಆ ತೊಡಕನ್ನು ನಿವಾರಿಸಿ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಲು ಅವಕಾಶ ವನ್ನು ಕಲ್ಪಿಸಿ ಕೊಡಲಾಗಿದೆ. ಎಂದು ಅವರು ಸ್ಪಷ್ಟ ಪಡಿಸಿದರು. ಇದರಿಂದ ಈ ರೀತಿಯ ಅರ್ಜಿಗಳು ಬೇಗ ಇತ್ಯರ್ಥವಾಗಲು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು.
Tags | ನೇಮಕಾತಿ, ವಿಶ್ವೇಶ್ವರ ಹೆಗಡೆ

November 24th, 2009 at 4:09 pm
Dear sir
Suppose the boy is a minor Now the boy age is 15 his father is death on 3.11.09 he is elegible for appointment on compassionate grounds