Categorized | ಅಂತರಾಷ್ಟ್ರಿಯ

ಮುಗಿಲು ಮುಟ್ಟಿದ ತೆಲಂಗಣಾ ಹೋರಾಟ

Posted on 20 January 2010 by murthy

ಹೈದರಾಬಾದ್, ಜ.20- ಪ್ರತ್ಯೇಕ ತೆಲಂಗಣಾ ರಾಜ್ಯ ರಚನೆ ವಿವಾದದಿಂದ ಕೊಂಚ ವಿರಾಮ ಪಡೆದಿದ್ದ ಆಂಧ್ರಪ್ರದೇಶ ಇದೀಗ ಮತ್ತದೇ ಆಸ್ಪೌಟಕ್ಕೆ ಗುರಿಯಾಗಿದೆ.
ರಾಜ್ಯ ರಚನೆ ನಿರ್ಣಯವನ್ನು ಅಂತಿಮಗೊಳಿಸುವಂತೆ ಪಟ್ಟು ಹಿಡಿದಿರುವ ತೆಲಂಗಣಾ ರಾಷ್ಟ್ತ್ರ ಸಮಿತಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿ ಜಂಟಿ ಕ್ರಿಯಾ ಸಮಿತಿ ಇಂದು ಅಖಂಡ ಆಂಧ್ರ ಬಂದ್ಗೆ ಕರೆ ನೀಡಿದ್ದು, ಕೆಲವಡೆ ಹಿಂಸಾಚಾರ ಮುಗಿಲು ಮುಟ್ಟಿದೆ. ಆಕ್ರೌಶ ಭರಿತ ತೆಲಂಗಣ ಪರ ಕಾರ್ಯಕರ್ತರು ರಾಜ್ಯ ರಸ್ತೆ ಸಾರಿಗೆ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿ ಹಲವು ಬಸ್ಗಳನ್ನು ಬೆಂಕಿಗೆ ಆಗುತಿ ಮಾಡಿದ್ದಾರೆ. 48 ಗಂಟೆಗಳ ಬಂದ್ಗೆ ಕರೆ ನೀಡಿರುವುದರಿಂದ ರಾಜಧಾನಿ ಹೈದರಾಬಾದ್ ಸೇರಿದಂತೆ ತೆಲಂಗಣ ಭಾಗದ 9 ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಸ್ ಸಂಚಾರ ಸ್ಥಗಿತಗೊಂಡಿದೆ.

ಎಲ್ಲೆಡೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ಗೆ ಸಂಪೂರ್ಣ ಬೆಂಬಲ ನೀಡುತ್ತಿರುವ ವ್ಯಾಪಾರಿಗಳು, ವಿದ್ಯಾರ್ಥಿ ಸಮುದಾಯ ಹಾಗು ರಾಜಕೀಯ ಪಕ್ಷಗಳ ಮುಖಂಡರು ಕೇಂದ್ರದ ವಿರುದ್ಧ ಉಗ್ರ ಹೋರಾಟಕ್ಕೆ ಮುನ್ನುಡಿ ಬೆರೆದಿದ್ದಾರೆ.

ಮತ್ತೊಂದೆಡೆ ತೆಲಂಗಣ ರಾಜ್ಯ ರಚನೆ ನಿರ್ಣಯವನ್ನು ಅಂತಿಮ ಗೊಳಿಸುವಂತೆ ಆಗ್ರಹಿಸಿ ಉಸ್ಮಾನಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಮುದಾಯ ಆತ್ಮಹತ್ಯೆಯತ್ತ ಮುಖ ಮಾಡಿದೆ. ಈಗಾಗಲೆ ವೇಣುಗೋಪಾಲ್ ರೆಡ್ಡಿ, ಸುವರ್ಣಮ್ಮ ಎಂಬ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಮತ್ತಷ್ಟು ಕಿಚ್ಚುಹಚ್ಚಿಸಿದೆ.
ರಾಜಕಾರಣಿಗಳು, ವಿದ್ಯಾರ್ಥಿ ಸಮುದಾಯವನ್ನೊಳಗೊಂಡ ಜಂಟಿ ಕ್ರಿಯಾಸಮಿತಿ ಇದೆ ದಿ.28ರೊಳಗೆ ರಾಜೀನಾಮೆ ಸಲ್ಲಿಸಿರುವ ಸಂಸತ್ ಹಾಗೂ ವಿಧಾನ ಸಭೆ ಸದಸ್ಯರ ರಾಜೀನಾಮೆಯನ್ನು ಅಂಗೀಕರಿಸಿಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಇಂದು ಮತ್ತು ನಾಳೆ ತೆಲಂಗಣ ಜಿಲ್ಲೆಗಳಲ್ಲಿ ಬಂದ್ ಮುಂದುವರಿಸಿದ್ದು, ಪ್ರತ್ಯೇಕ ತೆಲಂಗಣ ಬಿಕ್ಕಟ್ಟು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಹಲವೆಡೆ ರಾಜ್ಯ ರಸ್ತೆ ಸಾರಿಗೆಯ ಬಸ್ಗಳನ್ನು ಜಖಂಗೊಳಿಸಿರುವ ಪ್ರತಿಭಟನಾಕಾರರು ರಸ್ತೆಗಳಲ್ಲಿ ಟೈಯರ್ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೌಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಕೇಂದ್ರದ ಮೇಲೆ ಒತ್ತಡ ಹೇರಲು ಹಾಗೂ ತಮ್ಮ ರಾಜೀನಾಮೆ ಪತ್ರಗಳನ್ನು ಸ್ವೀಕರಿಸುವಂತೆ ಆಗ್ರಹಿಸಿ ತೆಲಂಗಣ ರಾಷ್ಟ್ತ್ರ ಸಮಿತಿ ಐವರು ವಿಧಾನ ಸಭೆ ಸದಸ್ಯರು, ಪ್ರಜಾರಾಜ್ಯಂ ಓರ್ವ ಶಾಸಕ ಕಳೆದ ರಾತ್ರಿ ಸ್ಪೀಕರ ಕಿರಣಕುಮಾರ ರೆಡ್ಡಿಯವರನ್ನು ಭೇಟಿ ಮಾಡಿ 3 ದಿನಗಳೊಳಗೆ ರಾಜೀನಾಮೆ ಅಂಗೀಕರಿಸದಿದ್ದಲ್ಲಿ ಹೋರಾಟವನ್ನು ಹೆಚ್ಚಿಸಲು ಎಚ್ಚರಿಕೆ ನೀಡಿದ್ದಾರೆ.

Leave a Reply

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಚೀನಾ ಓಪನ್ ಟೆನಿಸ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ವಾಟರ ಪಂಪ್ಹೌಸ್ ಧ್ವಂಸ ವಿಜ್ಞಾನ ವಿಕಾಸ ಸಂಕಲ್ಪ ಉತ್ಸವ ವ್ಯಾಸಂಗ ಸೈನಾ ಲೋಂಡಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives