ವಿವಾಹಿತ ಮಹಿಳೆಯೊಬ್ಬಳು 3 ಮಕ್ಕಳೊಂದಿಗೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ
Posted on 20 January 2010 by murthy
ರಾಮದುರ್ಗ, 20-: ವಿವಾಹಿತ ಮಹಿಳೆಯೊಬ್ಬಳು ಮನೆಯಲ್ಲಿ ಎಲ್ಲರೂ ಕೆಲಸಕ್ಕೆ ಹೋದ ಮೇಲೆ ತನ್ನ 3 ಮಕ್ಕಳ ಜೊತೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೆನ್ನೂರ ಗ್ರಾಮದಲ್ಲಿ ಇಂದು ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಎಂದರೆ ಹನಮವ್ವ ದ್ಯಾಮಣ್ಣಾ ಕುರಿ(25) ಇವ ಮಕ್ಕಳಾದ 4 ವರ್ಷದ ಹೆಣ್ಣು ಮಗು ಪವಿತ್ರಾ, 2 ವರ್ಷದ ಗಂಡು ಮಗು ಬಸವರಾಜ ಮತ್ತು ಒಂದು ವರ್ಷದ ಪ್ರವೀಣ ಎಂದು ತಿಳಿದು ಬಂದಿದೆ.
ಮೂಲತಃ ತಾಲೂಕಿನ ಉಮತಾರ ಗ್ರಾಮದವಳಾದ ಹಣಮವ್ವಳನ್ನು ಕಳೆದ 6-7 ವರ್ಷಗಳ ಹಿಂದೆ ಬೆನ್ನೂರ ಗ್ರಾಮದ ದ್ಯಾಮಣ್ಣ ಶಿದ್ದಪ್ಪ ಕುರಿ ಎಂಬವನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಇಂದು ಗಂಡ ಚಿಕ್ಕತಡಸಿ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದು ಅಲ್ಲದೆ ಮಾವ ಶಿದ್ದಪ್ಪ ಕುರಿ ಮೇಯಿಸಲು ಹೋದ ಸಂಧರ್ಭದಲ್ಲಿ ತನ್ನ 3 ಮಕ್ಕಳನ್ನು ಗ್ರಾಮದ ಸಮೀಪವಿರುವ ಮಲಪ್ರಭಾ ನದಿಯಲ್ಲಿ ಮೊದಲು ಮೂರು ಮಕ್ಕಳನ್ನು ನದಿ ಎಸೆದು ನಂತರ ತಾನು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಲಿಸರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿರುವದಿಲ್ಲ ಈ ಪ್ರಕರಣ ರಾಮದುರ್ಗ ಪೋಲಿಸ ಠಾಣೆಯಲ್ಲಿ ಪಿ.ಎಸ್.ಐ ಅರುಣ ಮುರಗುಂಡಿ ದಾಖಲಿಸಿಕೊಂಡಿದ್ದಾರೆ.
