ಇಂದು ಗೌಡರ ದಂಡು ದೆಹಲಿಗೆ
Posted on 07 March 2010 by murthy
ಬೆಂಗಳೂರು, ಪೆ. 16 : ರಾಜ್ಯ ಸರಕಾರ ಕೈಗಾರಿಕೆಗಳ ಹೆಸರಿನಲ್ಲಿ ರೈತರ 1.71 ಲಕ್ಷ ಭೂಮಿ ಸ್ವಾಧೀನಪಡಿಸಿಕೊಳ್ಳಲು ಅದಿಸೂಚನೆ ಹೊರಡಿಸಿರುವುದರ ವಿರುದ್ಧ ರೈತರಲ್ಲಿ ಜಾಗೃತಿ ಮೂಡಿಸಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನಾಳೆಯಿಂದ (ಬುಧವಾರ) ಪೆ. 23ರ ತನಕ ರೈತ ಜಾಗೃತಿ ಪ್ರವಾಸ ಕೈಗೊಳ್ಳಲಿದ್ದಾರೆ.
ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಸರಕಾರ ಭೂಮಿ ಸ್ವಾಧೀನ ಮಾಡಿಕೊಳ್ಳುವ ಎಲ್ಲಾ 26 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ರೈತರನ್ನು ಜಾಗೃತಿಗೊಳಿಸಲಾಗುವುದು ಎಂದರು. ನಾಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಂುು ಹೆಮ್ಮಿಗೆಪುರದಲ್ಲಿ ರೈತರ ಸಬೆ ನಡೆಸುವ ಮೂಲಕ ಪ್ರವಾಸ ಆರಂಭವಾಗಲಿದೆ. ಹುಬ್ಬಳ್ಳಿ, ದಾರವಾಡ, ಬೆಳಗಾವಿ, ಗದಗ, ತುಮಕೂರು, ಬಿಜಾಪುರ, ಗುಲ್ಬರ್ಗಾ, ಬೀದರ್, ಶಿವಮೊಗ್ಗ ಮತ್ತು ದಾವಣಗೆರೆಂುುಲ್ಲಿ ದೇವೇಗೌಡ ಜಾಗೃತಿ ಸಭೆ ನಡೆಸಲಿದ್ದಾರೆ.
