Categorized | ಬೆಳಗಾವಿ

ಹೆತ್ತ ಮಕ್ಕಳನ್ನು ಕೊಂದ ಪಾಪಿ ಹೆತ್ತವರು

Posted on 16 May 2010 by murthy

ಬೆಳಗಾವಿ/ನೆಲಮಂಗಲ, ಮೇ 15: ಕುಟುಂಬ ಕಲಹ ಅಥವಾ ವೈಯಕ್ತಿಕ ವಿಚಾರಗಳಿಂದ ಮನನೊಂದ ಹೆತ್ತವರು ಅಮಾಯಕ ಮಕ್ಕಳನ್ನೇ ಕೊಂದ ಹಾಕುವ ಅಮಾನುಷ ಘಟನೆಗಳ ಇತ್ತೀಚೆಗೆ ಹೆಚ್ಚಾಗುತ್ತಲೇ ಇವೆ.
ಕಳೆದ ರಾತ್ರಿಯಿಂದೆಚೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಡಗಲಿ ಹಾಗೂ ನೆಲಮಂಗಲಗಳಲ್ಲಿ ಇದೇ ಮಾದರಿಯ ಎರಡು ಪ್ರಕರಣಗಳು ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಡಗಲಿಯಲ್ಲಿ ಜನ್ಮ ಕೊಟ್ಟ ತಂದೆಯೇ ತನ್ನಿಬ್ಬರ ಮಕ್ಕಳಿಗೆ ವಿಷ ಉಣಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 35 ವರ್ಷದ ಅರವಿಂದ ದೇಸಾಯಿ ತನ್ನ ಮಕ್ಕಳಾದ 8 ವರ್ಷದ ಶೂಷಾಂತ 6 ವರ್ಷದ ಶಾನಿಕಾ ಅವರಿಗೆ ವಿಷ ಉಳಿಸಿ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನೊಂದು ಘಟನೆ ನೆಲಮಂಗಲದಲ್ಲಿ ನಡೆದಿದೆ. ಸಾಂಬಾರಿಗೆ ಉಪ್ಪು ಸಮಪ್ರಮಾಣದಲ್ಲಿ ಹಾಕಲಿಲ್ಲ ಎಂದು ಪತ್ನಿಯ ಮೇಲೆ ಕೋಪಗೊಂಡ ಪತಿ ತನ್ನ ಸಿಟ್ಟನ್ನು ತೀರಿಸಿಕೊಳ್ಳಲು ಆಕೆ ತನ್ನ ಮಕ್ಕಳನ್ನೇ ಬಲಿ ತೆಗೆದುಕೊಂಡು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹುಬ್ಬೆಗೌಡನ ಹಳ್ಳಿ ಸಮೀಪದ ಪಾಪಯ್ಯನ ಪಾಳ್ಯ ನಿವಾಸಿ ಶಶಿಕಲಾ ಎಂಬ 24 ವರ್ಷದ ಮಹಿಳೆ ತನ್ನ ಮಕ್ಕಳಾದ 6 ವರ್ಷದ ಶಿವಕುಮಾರ್ 4 ವರ್ಷದ ಚೈತ್ರ ಅವರ ಕತ್ತು ಕೊಯ್ದು ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Leave a Reply

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಚೀನಾ ಓಪನ್ ಟೆನಿಸ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ವಾಟರ ಪಂಪ್ಹೌಸ್ ಧ್ವಂಸ ವಿಜ್ಞಾನ ವಿಕಾಸ ಸಂಕಲ್ಪ ಉತ್ಸವ ವ್ಯಾಸಂಗ ಸೈನಾ ಲೋಂಡಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives