ದೇಣಿಗೆಯ ನಿಧಿ ಬಳಕೆಯ ವಿವರ ವೆಬ್ಸೈಟಿನಲ್ಲಿ ಲಭ್ಯ
ಬೆಂಗಳೂರು, 19- ಪ್ರವಾಹ ಪೀಡಿತ ಸಂತ್ರಸ್ತರಿಗಾಗಿ ಸಂಗ್ರಹಿಸಿರುವ ದೇಣಿಗೆ ನಿಧಿಯನ್ನು ಸಮರ್ಪಕವಾಗಿ ಹಾಗೂ ಪಾರದರ್ಶಕವಾಗಿ ನಿರ್ವಹಿಸಲು ವೆಬ್ಸೈಟು ರೂಪಿಸಿದ್ದು ಇದರಲ್ಲಿ ಯಾವುದೇ ಅವ್ಯವಹಾರಕ್ಕೆ ಅವಕಾಶವಿಲ್ಲ. ಎಂದು ಕಾನೂನು ಸಚಿವ ಸುರೇಶ ಕುಮಾರ್ ಹೇಳಿದ್ದಾರೆ. ಪ್ರಕಾಶ ನಗರದಲ್ಲಿಂದು ಒಂದು ಕೋಟಿ ರೂಪಾಯಿ ವೆಚ್ಚದ ಒಳಾಂಗಣ ಕ್ರೀಡಾಂಗಣದ ಸಂರ್ಕೀಣ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿ ದರು. ನೆರೆ ಸಂತ್ರಸ್ಥರ ಮರು ವಸತಿಗಾಗಿ ರಾಜ್ಯ ಸರಕಾರ ಸಮಾರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಇದಕ್ಕಾಗಿ ಇಡೀ ಸಮಾಜ ಸರಕಾರದ ಬೆಂಬಲಕ್ಕೆ ನಿಂತಿದೆ ಎಂದರು. ಈ ಹಿನ್ನಲೆ [...] [...more]
